ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ | ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ
LIVE

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿಪೂಜೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಸಾಧು–ಸಂತರು, ರಾಜಕಾರಣಿಗಳು ಸೇರಿದಂತೆ ಒಟ್ಟು 175 ಮಂದಿ ಅತಿಥಿಗಳು ಭಾಗವಹಿಸಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಹೆಚ್ಚು ಜನ ಸ್ಥಳಕ್ಕೆ ಬರಬಾರದೆಂದು ಮನವಿ ಮಾಡಲಾಗಿತ್ತು. ಈ ಕಾರ್ಯಕ್ರಮದ ಕ್ಷಣಕ್ಷಣದ ಅಪ್‌ಡೇಟ್ಸ್ ಇಲ್ಲಿದೆ.
Last Updated 5 ಆಗಸ್ಟ್ 2020, 11:06 IST
ಅಕ್ಷರ ಗಾತ್ರ
08:5305 Aug 2020

ಶ್ರೀರಾಮಚಂದ್ರ ಕಿ ಜೈ – ಘೋಷಣೆಯೊಂದಿಗೆ ಮೋದಿ ಭಾಷಣ ಮುಕ್ತಾಯ

08:5205 Aug 2020

ಕೋವಿಡ್ ದೂರ ಇಡಬೇಕು ಎಂದಾದರೆ ಮಾಸ್ಕ್‌ಗಳನ್ನು ಜರೂರು ಬಳಸಿ. ಎಲ್ಲ ದೇಶವಾಸಿಗಳ ಮೇಲೆ ಮಾತೆ ಸೀತಾದೇವಿ ಮತ್ತು ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಇರಲಿ.

08:5205 Aug 2020

ನಾವೆಲ್ಲರೂ ಮುಂದೆ ಹೆಜ್ಜೆಯಿಟ್ಟರೆ ದೇಶ ಮುಂದೆ ಹೆಜ್ಜೆಯಿಡುತ್ತದೆ. ರಾಮನ ಈ ಮಂದಿರವು ಹಲವು ಯುಗಗಳವರೆಗೆ ಮಾನವತೆಗೆ ಪ್ರೇರಣೆ ಕೊಡುತ್ತದೆ. ಕೊರೊನಾ ಕಾಲದಲ್ಲಿ ರಾಮನ ಆದರ್ಶದ ಅಗತ್ಯ ಹಿಂದಿಗಿಂತಲೂ ಹೆಚ್ಚು ಇದೆ.

08:5005 Aug 2020

ರಾಮನನ್ನು ಗೌರವಿಸಿದಾಗ ಅಭಿವೃದ್ಧಿ ಸಾಧ್ಯ. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು, ಎಲ್ಲರ ಅಭಿವೃದ್ಧಿಗಾಗಿ ದುಡಿಯುವ ಆತ್ಮವಿಶ್ವಾಸ ನಮಗೆ ಸಿಗುತ್ತದೆ. ಆತ್ಮನಿರ್ಭರ ಭಾರತಕ್ಕೂ ರಾಮನ ಸಂದೇಶ ಪೂರಕ.

08:5005 Aug 2020

ನಾವು ಹೇಗೆ ಕೆಲಸ ಮಾಡಬೇಕು ಎನ್ನವುದಕ್ಕೆ ಇದು ಆಧಾರವಾಗಬೇಕು. ಜನರನ್ನು ಪ್ರೀತಿಸಲು, ಸಮಾಜದಲ್ಲಿ ಸಾಮರಸ್ಯ ಕಾಪಾಡಲು ರಾಮ ಪ್ರೇರಣೆಯಾಗಬೇಕು.

08:4905 Aug 2020

ರಾಮ ತನ್ನ ಬಗ್ಗೆ ಹೇಳಿಕೊಳ್ಳುವಾಗ ’ನಾನು ಸಮಯ, ಸ್ಥಾನ, ಪರಿಸ್ಥಿತಿಗೆ ತಕ್ಕಂತೆ ಯೋಚಿಸುತ್ತೇನೆ ಮತ್ತು ಕೆಲಸ ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದೇನೆ.

08:4805 Aug 2020

ರಾಷ್ಟ್ರಪಿತ ಮಹಾತ್ಮಗಾಂಧಿ ಇದೇ ಸೂತ್ರಗಳ ಆಧರಿಸಿದ ರಾಮರಾಜ್ಯದ ಕನಸು ಕಂಡಿದ್ದರು. ರಾಮ ತನ್ನ ಬಗ್ಗೆ ಹೇಳಿಕೊಳ್ಳುವಾಗ ಸಮಯ, ಸ್ಥಾನ, ಪರಿಸ್ಥಿತಿಗೆ ತಕ್ಕಂತೆ ಯೋಚಿಸುತ್ತಾನೆ ಮತ್ತು ಕೆಲಸ ಮಾಡುತ್ತಾನೆ

08:4805 Aug 2020

ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ (ತಾಯಿ ಮತ್ತು ಸ್ವದೇಶ ಸ್ವರ್ಗಕ್ಕಿಂತ ಹೆಚ್ಚು) ಎನ್ನವುದು ರಾಮನ ಸಂದೇಶ. ನಮ್ಮ ದೇಶ ಎಷ್ಟು ಬೆಳೆದರೂ ನೀತಿಯ ಹಾದಿಯಿಂದ ಹಿಂದೆ ಸರಿಯುವುದಿಲ್ಲ. ಇದು ರಾಮನ ಆದರ್ಶ.

08:4805 Aug 2020

ಎಲ್ಲ ಸ್ತ್ರೀ–ಪುರುಷರು ಸಮಾನ ಸುಖಿಗಳಾಗಿದ್ದರು ಎನ್ನುವುದು ರಾಮನ ಆಡಳಿತದ ವೈಭವ. ರಾಮನ ಆಡಳಿತದಲ್ಲಿ ರೈತರು, ಪಶುಪಾಲಕರು ಖುಷಿಯಾಗಿ ಜೀವನ ಸಾಗಿಸುತ್ತಿದ್ದರು. ವೃದ್ಧರು, ಬಾಲಕರು, ರೋಗಿಗಳಿಗೂ ರಾಮನ ಆಡಳಿತದಲ್ಲಿ ಬೆಚ್ಚನೆ ರಕ್ಷೆಯಿತ್ತು.

08:4205 Aug 2020

ಇಡೀ ಜಗತ್ತಿನಲ್ಲಿ ರಾಮನಂಥ ರಾಜ ಇರಲಿಲ್ಲ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ರಾಮನ ಆಡಳಿತದಲ್ಲಿ ಯಾರೂ ದುಃಖಿಗಳು, ಬಡವರು ಇರಲಿಲ್ಲ.