ವೈಷ್ಣೋಯಿ ಅವರ ಮನೆಯಿಂದ ಎರಡು ಪತ್ರಗಳು ಲಭಿಸಿದ್ದವು. ಒಂದು ತಮ್ಮ ಪಾಲಕರಿಗೆ ಬರೆದದ್ದು, ಇನ್ನೊಂದು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದದ್ದಾಗಿತ್ತು. ‘ಇಲಾಖೆಗೆ ಅತ್ಯುತ್ತಮ ಸೇವೆ ನೀಡಲು ಶ್ರಮಿಸಿದ್ದೇನೆ. ಆದರೆ ಒತ್ತಡ ಹೆಚ್ಚಾಗುತ್ತಿದ್ದು, ಅದನ್ನು ತಾಳಲಾರದೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಪತ್ರದಲ್ಲಿ ಬರೆಯಲಾಗಿತ್ತು.