ಗಡಿಯಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ ಅವರ ಬಗ್ಗೆ ವಾಸ್ತವ ಸ್ಥಿತಿ ತಿಳಿಸಿ ಎಂದು ಕೇಳಿದರೆ, ಪ್ರಧಾನಿ ನಮ್ಮ ಸರಹದ್ದಿನಲ್ಲಿ ಯಾರೂ ಬಂದಿಲ್ಲ. ನಮ್ಮ ಭೂಮಿ ಯಾರೂ ವಶಪಡಿಸಿಡಿಲ್ಲ ಎಂದು ಹೇಳಿದರು. ಹಾಗಿದ್ದರೆ 20 ಜನ ಸೈನಿಕರು ಹೇಗೆ ಪ್ರಾಣ ಕಳೆದುಕೊಂಡರು ಎನ್ನುವುದನ್ನು ಜನರಿಗೆ ತಿಳಿಸಬೇಕು.ಮೋದಿ ಏನೇ ಮಾತನಾಡಿದರು ಯುವಕರು ಚಪ್ಪಾಳೆ ಹೊಡೆಯುತ್ತಾರೆ ಎಂದು ವಿಷಾದಿಸಿದರು.