ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ: ಹುಂಡಿಗೆ 20 ಚಿನ್ನದ ಗಟ್ಟಿಗಳ ಅರ್ಪಣೆ

Last Updated 12 ಜುಲೈ 2020, 10:58 IST
ಅಕ್ಷರ ಗಾತ್ರ

ತಿರುಪತಿ: ಇಲ್ಲಿನ ತಿರುಮಲ ಬೆಟ್ಟದಲ್ಲಿರುವ ವೆಂಕಟೇಶ್ವರ ದೇಗುಲದ ಹುಂಡಿಗೆಭಕ್ತರೊಬ್ಬರು 20 ಚಿನ್ನದ ಗಟ್ಟಿ‌ಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.

‘ಶನಿವಾರ ದೇವಾಲಯದ ದಿನದ ಸಂಗ್ರಹ ಮೊತ್ತವನ್ನು ಎಣಿಸುತ್ತಿದ್ದಾಗ ಹುಂಡಿಯಲ್ಲಿ 2 ಕೆ.ಜಿ ತೂಕದ ಚಿನ್ನದ ಗಟ್ಟಿಗಳು ಸಿಕ್ಕಿವೆ’ ಎಂದು ತಿರುಮಲ ತಿರುಪತಿ ದೇವಸ್ಥಾನದ ‌(ಟಿಟಿಡಿ) ಕಾರ್ಯನಿರ್ವಹಣಾ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ತಿಳಿಸಿದರು.

‘ಲಾಕ್‌ಡೌನ್‌ನಿಂದ ಮುಚ್ಚಲ್ಪಟ್ಟಿದ್ದ ದೇವಸ್ಥಾನದ ದ್ವಾರಗಳನ್ನು ಜೂನ್‌ 11ರಿಂದ ತೆರೆಯಲಾಗಿದ್ದು ಕಳೆದ ತಿಂಗಳು ದೇವಸ್ಥಾನದ ಹುಂಡಿಯಲ್ಲಿ ₹16.7 ಕೋಟಿ ಸಂಗ್ರಹವಾಗಿದೆ. ಲಾಕ್‌ಡೌನ್‌ ತೆರವಿನ ಬಳಿಕಕಳೆದ ತಿಂಗಳು 2.5 ಲಕ್ಷ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿದ್ದರು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT