ತಿರುಪತಿ: ಇಲ್ಲಿನ ತಿರುಮಲ ಬೆಟ್ಟದಲ್ಲಿರುವ ವೆಂಕಟೇಶ್ವರ ದೇಗುಲದ ಹುಂಡಿಗೆಭಕ್ತರೊಬ್ಬರು 20 ಚಿನ್ನದ ಗಟ್ಟಿಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
‘ಶನಿವಾರ ದೇವಾಲಯದ ದಿನದ ಸಂಗ್ರಹ ಮೊತ್ತವನ್ನು ಎಣಿಸುತ್ತಿದ್ದಾಗ ಹುಂಡಿಯಲ್ಲಿ 2 ಕೆ.ಜಿ ತೂಕದ ಚಿನ್ನದ ಗಟ್ಟಿಗಳು ಸಿಕ್ಕಿವೆ’ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದರು.
‘ಲಾಕ್ಡೌನ್ನಿಂದ ಮುಚ್ಚಲ್ಪಟ್ಟಿದ್ದ ದೇವಸ್ಥಾನದ ದ್ವಾರಗಳನ್ನು ಜೂನ್ 11ರಿಂದ ತೆರೆಯಲಾಗಿದ್ದು ಕಳೆದ ತಿಂಗಳು ದೇವಸ್ಥಾನದ ಹುಂಡಿಯಲ್ಲಿ ₹16.7 ಕೋಟಿ ಸಂಗ್ರಹವಾಗಿದೆ. ಲಾಕ್ಡೌನ್ ತೆರವಿನ ಬಳಿಕಕಳೆದ ತಿಂಗಳು 2.5 ಲಕ್ಷ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿದ್ದರು’ ಎಂದು ಅವರು ಹೇಳಿದರು.