‘ಅಧಿವೇಶನ ನಡೆಸಲು ಅತ್ತ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಸಮ್ಮತಿ ನೀಡುತ್ತಲೇ, ಇತ್ತ ನಮ್ಮ ಶಾಸಕರಿಗೆ ಕರೆಗಳು ಬರಲಾರಂಭಿಸಿವೆ. ಅವರಿಗೆ ಒಡ್ಡಲಾಗುತ್ತಿರುವ ಹಣದ ಆಮಿಷದ ಪ್ರಮಾಣ ದಿಢೀರ್ ಏರಿಕೆಯಾಗಿದೆ. ಈ ಹಿಂದೆ, ಮೊದಲ ಕಂತಿನಲ್ಲಿ ₹10 ಕೋಟಿ ನೀಡುವುದಾಗಿಯೂ, ನಂತರ ₹15 ಕೋಟಿ ನೀಡುವುದಾಗಿಯೂ ಹೇಳಲಾಗುತ್ತಿತ್ತು. ಈಗ ಎಷ್ಟು ಬೇಕಾದರೂ ಕೇಳುವಂತೆ ಶಾಸಕರಿಗೆ ಆಸೆ ಹುಟ್ಟಿಸಲಾಗುತ್ತಿದೆ. ಇದು ಬೆಲೆಯಲ್ಲಿ ಆದ ಏರಿಕೆಯನ್ನು ಸೂಚಿಸುತ್ತಿದೆ. ಶಾಸಕರ ಖರೀದಿಯಲ್ಲಿಯಾರು ತೊಡಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ,’ ಎಂದು ಅವರು ವ್ಯಂಗ್ಯವಾಡಿದ್ದಾರೆ.