1992ರ ಬಾಬರಿ ಮಸೀದಿ ಧ್ವಂಸ ಪ್ರಕರಣ ಮತ್ತು 1996ರ ಲೋಕಸಭಾ ಚುನಾವಣೆ ಸೋಲಿಗೆ ರಾವ್ ಕಾರಣ ಎಂದು ಕಾಂಗ್ರೆಸ್ ಅವರನ್ನು ದೂರವಿಟ್ಟಿತ್ತು. ಅಲ್ಲದೆ, ರಾವ್ ಅವರು 2004ರಲ್ಲಿ ನಿಧನ ಹೊಂದಿದಾಗ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ.ಕಾಂಗ್ರೆಸ್ನ ಕುಟುಂಬ ರಾಜಕಾರಣಕ್ಕೆ ರಾವ್ ಅವರು ಬಲಿಯಾಗಿದ್ದರು ಎಂದು ಪ್ರಧಾನಿ ಮೋದಿ ಕೂಡ ಟೀಕಿಸಿದ್ದರು.