ಹಣ ಸುಲಿಗೆಗಾಗಿ ಕಾನ್ಪುರದ ಸಂಜೀತ್ ಯಾದವ್ ಎಂಬುವರನ್ನು ಅಪಕರಿಸಿದ್ದ ಗೂಂಡಾಗಳು, ಹಣ ಪಡೆದ ನಂತರವೂ ಅವರ ಹತ್ಯೆ ಮಾಡಿದ್ದರು. ಈ ಘಟನೆಯನ್ನು ಉಲ್ಲೇಖಿಸಿದ ಪ್ರಿಯಾಂಕಾ, ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ರಸ್ತೆಯಲ್ಲಿರಲಿ, ಕಚೇರಿಯಲ್ಲಿರಲಿ ಅಥವಾ ಮನೆಯಲ್ಲೇ ಇರಲಿ, ಯಾರೊಬ್ಬರಲ್ಲೂ ಸುರಕ್ಷತೆಯ ಭಾವ ಇಲ್ಲದಾಗಿದೆ’ ಎಂದು ಕಿಡಿಕಾರಿದ್ದಾರೆ.