ಐಷಾರಾಮಿ ರೆಸಾರ್ಟ್ವೊಂದರಲ್ಲಿ ರಾಜಸ್ಥಾನ ಕಾಂಗ್ರೆಸ್ ಮಂಗಳವಾರ ಮತ್ತೊಂದು ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಶಾಸಕರನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, 'ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆಸಬೇಕೆಂದು ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳು ಬಯಸುವುದಿಲ್ಲ. ನಾವು ಹೋರಾಡುತ್ತಿರುವ ವಿಧಾನವನ್ನು ಇಡೀ ದೇಶ ನೋಡುತ್ತಿದೆ. ನಿಮ್ಮ ಬಗೆಗಿನ ಗೌರವವು ಮತ್ತಷ್ಟು ಹೆಚ್ಚಾಗಿದೆ. ಇದು ಸಾಮಾನ್ಯ ಸಂಗತಿಯಲ್ಲ. ನಿಮ್ಮೆಲ್ಲರ ಬಳಿ ಫೋನ್ಗಳಿವೆ. ಯಾರ ಮೇಲೂ ಯಾವುದೇ ಒತ್ತಡವಿಲ್ಲ' ಎಂದು ಹೇಳಿದ್ದಾರೆ.