ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ಪೀಠದ ಎದುರು ಸ್ಪೀಕರ್ ಜೋಶಿ ವಕೀಲ ಕಪೀಲ್ ಸಿಬಲ್ ಸೋಮವಾರ ಹಾಜರಾದರು. ‘ಅನರ್ಹತೆ ವಿಚಾರಣೆಯನ್ನು ಸ್ಪೀಕರ್ ಶುಕ್ರವಾರದ ವರೆಗೆ (ಜುಲೈ24) ಮುಂದೂಡಬೇಕು ಎಂದು ಕಳೆದ ಮಂಗಳವಾರ (ಜುಲೈ 21) ರಾಜಸ್ಥಾನ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ ಈ ವಿಚಾರದಲ್ಲಿ ಯಾವುದೇ ಆದೇಶ ನೀಡಬಾರದು ಎಂದು ಕೋರಿದ್ದ ಸ್ಪೀಕರ್ ಅರ್ಜಿಗೆ ಸುಪ್ರೀಂ ಕೋರ್ಟ್ ಮನ್ನಣೆ ನೀಡಿಲ್ಲ.ಈ ಮಧ್ಯೆ ರಾಜಸ್ಥಾನ ಹೈಕೋರ್ಟ್ ಹೊಸ ಆದೇಶ ನೀಡಿದೆ. ಹೀಗಾಗಿ ಸುಪ್ರೀಂ ಕೋರ್ಟ್ನಲ್ಲಿರುವ ಈ ಮೇಲ್ಮನವಿ ಪರಿಣಾಮಕಾರಿಯಲ್ಲ,’ಎಂದು ಹೇಳಿದರು.