ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್ವಾನ್‌ರನ್ನು ಗುಂಡಿಕ್ಕಿ ಕೊಲ್ತೀನಿ: ಶೇಖಾಪುರ ಪುರಸಭೆಯ ಸದಸ್ಯನ ಬೆದರಿಕೆ

Last Updated 28 ಜುಲೈ 2020, 21:10 IST
ಅಕ್ಷರ ಗಾತ್ರ

ಶೇಖಾಪುರ, ಬಿಹಾರ : ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಶೇಖಾಪುರ ಪುರಸಭೆಯ ಸದಸ್ಯ ಸಂಜಯ್‌ ಯಾದವ್‌ ಬೆದರಿಕೆ ಹಾಕಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ಕೇಂದ್ರ ಗ್ರಾಹಕರ ವ್ಯವಹಾರಗಳ ಖಾತೆ ಸಚಿವರಾಗಿರುವ ಪಾಸ್ವಾನ್‌ ಹಾಗೂ ಅವರ ಮಗ, ಸಂಸದ ಚಿರಾಗ್‌ ಪಾಸ್ವಾನ್‌ ಅವರುಬಡವರು ಹಾಗೂ ನಿರ್ಗತಿಕರಿಗೆ ಪಡಿತರ ಚೀಟಿ‌ ನೀಡಲು ವಿಫಲರಾಗಿದ್ದಾರೆ. ಎಕೆ 47 ಬಳಸಿ ಪಾಸ್ವಾನ್‌ ಅವರನ್ನು ಹತ್ಯೆ ಮಾಡುತ್ತೇನೆ’ ಎಂದು ಯಾದವ್‌ ವಿಡಿಯೊದಲ್ಲಿ ಹೇಳಿದ್ದಾರೆ.

ಈ ಸಂಬಂಧ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಜಿಲ್ಲಾಧ್ಯಕ್ಷ ಇಮಾನ್‌ ಗಜಾಲಿ ಅವರು ಮಂಗಳವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಯಾ ಶಂಕರ್ ಅವರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT