‘ಮಾರ್ಚ್ 6ರ ನಂತರದಲ್ಲಿ ದೇಶದಾದ್ಯಂತ ಕೋವಿಡ್ ಪಿಡುಗು ಏರಿಕೆಯಾಗುತ್ತಿದೆ. ಅನಗತ್ಯವಾಗಿ ವಿಚಾರಣಾಧೀನ ಕೈದಿಗಳನ್ನು ಜೈಲಿನಲ್ಲಿ ಇರಿಸುವುದರಿಂದ, ಕೋವಿಡ್ ಹರಡುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸರ ಕ್ರೌರ್ಯವನ್ನು ನಾವು ಅನುಭವಿಸಿದ್ದೇವೆ. ಇಂಥ ಸಂದರ್ಭದಲ್ಲಿ ಜಾಮೀನು ನಿರಾಕರಿಸಿದರೆ, ಮನಸ್ಸಿಗೆ ವಾಸಿಯಾಗದಂತ ಗಾಯವಾಗಬಹುದು, ಸಾವೂ ಸಂಭವಿಸಬಹುದು’ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.