‘ಬಿಹಾರದಲ್ಲಿ ಕೋವಿಡ್ಗೆ ಕಡಿವಾಣ ಹಾಕಲು ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ವಿಫಲವಾಗಿದೆ. ಇದನ್ನು ಮರೆಮಾಚುವ ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಸುಶಾಂತ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಾಗಿದೆ’ ಎಂದು ಎನ್ಸಿಪಿ ವಕ್ತಾರ ಹಾಗೂ ಸಚಿವ ನವಾಬ್ ಮಲಿಕ್ ಮಂಗಳವಾರ ಹೇಳಿದ್ದಾರೆ.