ಆರೋಗ್ಯ ಇಲಾಖೆ ಸಿಬ್ಬಂದಿ ಎಂದು ನಕಲಿ ಗುರುತುಪತ್ರಗಳನ್ನು ತಯಾರಿಸಿಕೊಂಡು, ಅಪಹರಣಕಾರರು ಮಧ್ಯಾಹ್ನ ಮಾಸ್ಕ್, ಸ್ಯಾನಿಟೈಸರ್ ಹಂಚಲು ಕರ್ನಲ್ಗಂಜ್ಗೆ ಬಂದಿದ್ದರು. ಗುಟ್ಕಾ ವ್ಯಾಪಾರಿ ರಾಜೇಶ್ ಕುಮಾರ್ ಅವರ ಆರು ವರ್ಷದ ಮೊಮ್ಮಗನನ್ನು ಅಪಹರಣಕಾರರು ತಮ್ಮ ವಾಹನದೊಳಗೆ ಎಳೆದುಕೊಂಡು ಪರಾರಿಯಾಗಿದ್ದರು. ಇದಾಗಿ ಸ್ವಲ್ಪ ಸಮಯದ ನಂತರ ಮಹಿಳೆಯೊಬ್ಬರು ಕುಟುಂಬದವರಿಗೆ ಕರೆಮಾಡಿ ನಾಲ್ಕು ಕೋಟಿ ರೂಪಾಯಿ ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದರು.