‘ಸಮೀಕ್ಷೆಗೆ ಒಳಪಟ್ಟವರ ಆರೋಗ್ಯದ ಮೇಲೆ ಸತತ ನಿಗಾ ಇಟ್ಟಿರುವ ಕಾರ್ಯಕರ್ತೆಯರು, ನಿಯಮಿತವಾಗಿ ಅವರ ಮನೆಗಳಿಗೆ ತೆರಳಿ, ಪರಿಶೀಲನಾ ಕಾರ್ಯವನ್ನೂ ಕೈಗೊಳ್ಳುತ್ತಿದ್ದಾರೆ. ಐಎಲ್ಐ, ಸಾರಿ ಲಕ್ಷಣಗಳುಳ್ಳ ಜನರು ಇರುವ ಮನೆಗಳಿಗೂ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ. ಅವರಿಗೆ ಸಲಹೆ–ಸೂಚನೆ ನೀಡಿ ಧೈರ್ಯ ತುಂಬಿದ್ದಾರೆ’ ಎಂದೂ ಸಚಿವಾಲಯ ಮೆಚ್ಚುಗೆ ಸೂಚಿಸಿದೆ.