ಲಖನೌ: ಆಗ್ರಾದ ಬಳಿಯಿರುವ ರುದ್ರಭೂಮಿಯು ಮೇಲ್ಜಾತಿಗೆ ಸೇರಿದೆ ಎಂಬ ಕಾರಣಕ್ಕೆದಲಿತ ಮಹಿಳೆಯ ಶವವನ್ನು ಚಿತಾಗಾರದಿಂದ ಹೊರತೆಗೆಯಲಾಗಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು ಮಂಗಳವಾರ ಒತ್ತಾಯಿಸಿದ್ದಾರೆ.
‘ಮೇಲ್ಜಾತಿಗೆ ಸೇರಿದ ಕೆಲ ಜನರು ದಲಿತ ಮಹಿಳೆಯ ಶವವನ್ನು ಚಿತಾಗಾರದಿಂದ ಹೊರತೆಗೆದಿದ್ದಾರೆ. ಆ ರುದ್ರಭೂಮಿ ಮೇಲ್ಜಾತಿಗೆ ಸೇರಿದೆ ಎಂಬ ಕಾರಣಕ್ಕೆ ಈ ರೀತಿಯ ಕೃತ್ಯ ಎಸಗಿದ್ದಾರೆ. ಇದು ನಿಜಕ್ಕೂ ನಾಚಿಗೇಡಿನ ವಿಷಯ. ಇಂತಹ ನಡೆ ಖಂಡನೀಯ’ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಈ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಬೇಕು. ಇಂತಹ ಘಟನೆಗಳು ಮುಂದೆ ನಡೆಯಬಾರದು. ಹಾಗಾಗಿಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಕೋವಿಡ್ನಿಂದ ಮೃತಪಟ್ಟ ಮಧ್ಯಪ್ರದೇಶದ ದಲಿತ ವೈದ್ಯರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.