ಮುಂಬೈ: ‘ಸಾಮಾಜಿಕ ಹೋರಾಟಗಾರ ವರವರ ರಾವ್ ಅವರು ಜಾಮೀನಿಗೆ ಅನಾರೋಗ್ಯದ ಕಾರಣ ನೀಡಿರುವುದು ನೆಪ ಮಾತ್ರ. ಅವರು ವಯಸ್ಸು ಮತ್ತು ಕೋವಿಡ್-19 ಸಂದರ್ಭದ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಬಾಂಬೆ ಹೈಕೋರ್ಟಿಗೆ ತಿಳಿಸಿತು.
ಎಲ್ಗಾರ್ ಪರಿಷತ್ -ಮಾವೋವಾದಿ ಸಂಪರ್ಕ ಆರೋಪದಡಿ ವರವರರಾವ್ ಅವರನ್ನು ಎನ್ಐಎ ಬಂಧಿಸಿದೆ. ವರವರರಾವ್ ಅವರ ಆರೋಗ್ಯ ಸ್ಥಿರವಾಗಿದೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಚಿಕಿತ್ಸೆ ಬೇಕಿಲ್ಲ ಎಂದೂ ಹೇಳಿದೆ.
81 ವರ್ಷದ ವರವರ ರಾವ್ ಅವರಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟ ಮಾರನೇ ದಿನ, ಜುಲೈ 16ರಂದು ಈ ಕುರಿತು ಪ್ರಮಾಣಪತ್ರ ಸಲ್ಲಿಸಲಾಗಿದೆ.