ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ | ಉಪ ಸಭಾಪತಿಗಳ ಸಮಿತಿ: ಎಲ್‌. ಹನುಮಂತಯ್ಯ ಸೇರಿ 6 ಸದಸ್ಯರ ನೇಮಕ

Last Updated 25 ಜುಲೈ 2020, 3:28 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭೆಯ ಉಪ ಸಭಾಪತಿಗಳ ಸಮಿತಿಯನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಪುನರ್ ರಚನೆ ಮಾಡಿದ್ದಾರೆ.

ಈ ಸಮಿತಿಯಲ್ಲಿ ರಾಜ್ಯದ ಎಲ್‌. ಹನುಮಂತಯ್ಯ ಅವರು ಸ್ಥಾನ ಪಡೆದಿದ್ದಾರೆ. 6 ಜನ ರಾಜ್ಯಸಭಾ ಸದಸ್ಯರನ್ನು ಈ ಸಮಿತಿಗೆ ಸದಸ್ಯರನ್ನಾಗಿ ಎಂ.ವೆಂಕಯ್ಯ ನಾಯ್ಡು ಅವರು ನಾಮನಿರ್ದೇಶನ ಮಾಡಿದ್ದಾರೆ.

ಬಿಜೆಪಿಯ ಭುವನೇಶ್ವರ ಕಲಿತಾ ಮತ್ತು ಸುರೇಂದ್ರ ಸಿಂಗ್ ನಗರ್, ಕಾಂಗ್ರೆಸ್ ಪಕ್ಷದ ಎಲ್ ಹನುಮಂತಯ್ಯ, ಎನ್‌ಸಿಪಿಯ ವಂದನಾ ಚವಾಣ್, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಂದ ಸುಖೇಂದು ಶೇಖರ್ ರಾಯ್, ಬಿಜೆಡಿಯಿಂದ ಸಸ್ಮಿತ ಪಾತ್ರಾ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT