ನವದೆಹಲಿ: ರಾಜ್ಯಸಭೆಯ ಉಪ ಸಭಾಪತಿಗಳ ಸಮಿತಿಯನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಪುನರ್ ರಚನೆ ಮಾಡಿದ್ದಾರೆ.
ಈ ಸಮಿತಿಯಲ್ಲಿ ರಾಜ್ಯದ ಎಲ್. ಹನುಮಂತಯ್ಯ ಅವರು ಸ್ಥಾನ ಪಡೆದಿದ್ದಾರೆ. 6 ಜನ ರಾಜ್ಯಸಭಾ ಸದಸ್ಯರನ್ನು ಈ ಸಮಿತಿಗೆ ಸದಸ್ಯರನ್ನಾಗಿ ಎಂ.ವೆಂಕಯ್ಯ ನಾಯ್ಡು ಅವರು ನಾಮನಿರ್ದೇಶನ ಮಾಡಿದ್ದಾರೆ.
ಬಿಜೆಪಿಯ ಭುವನೇಶ್ವರ ಕಲಿತಾ ಮತ್ತು ಸುರೇಂದ್ರ ಸಿಂಗ್ ನಗರ್, ಕಾಂಗ್ರೆಸ್ ಪಕ್ಷದ ಎಲ್ ಹನುಮಂತಯ್ಯ, ಎನ್ಸಿಪಿಯ ವಂದನಾ ಚವಾಣ್, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಂದ ಸುಖೇಂದು ಶೇಖರ್ ರಾಯ್, ಬಿಜೆಡಿಯಿಂದ ಸಸ್ಮಿತ ಪಾತ್ರಾ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
Rajya Sabha Chairman M Venkaiah Naidu reconstitutes the Panel of Vice-Chairmen. Bhubaneswar Kalita, Vandana Chavan, Sukhendu Sekhar Ray, Surendra Singh Nagar, L Hanumanthaiah, & Sasmit Patra to be the members. pic.twitter.com/QidTRycKJM