‘ಉತ್ತರ ಪ್ರದೇಶದ ಚೌಬೆಪುರದ ಬಳಿ ಸೋಮವಾರ ರಾತ್ರಿ ಶಶಿಕಾಂತ್ನನ್ನು ಬಂಧಿಸಲಾಗಿದೆ. ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮದಲ್ಲಿ ಪೊಲೀಸರ ಮೇಲೆ ದಾಳಿಯಲ್ಲಿ ತಾನು ಭಾಗಿಯಾಗಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಪೊಲೀಸರಿಂದ ಲೂಟಿ ಮಾಡಲಾಗಿದ್ದ ಎಕೆ–47 ರೈಫಲ್ ಅನ್ನು ದುಬೆ ಮನೆಯಲ್ಲಿರಿಸಿದ್ದ. ಇನ್ನೊಂದು ‘ಐಎನ್ಎಸ್ಎಎಸ್’ ರೈಫಲ್ ಅನ್ನು ತನ್ನ ಮನೆಯಲ್ಲಿರಿಸಿಕೊಂಡಿದ್ದ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.