ನಾಲ್ಕು ಕಡೆಗಳಿಂದ ಹೆದ್ದಾರಿಯಿಂದ ಕಟಪಾಡಿಗೆ ಜಂಕ್ಷನ್ಗೆ ಬರುವ ವಾಹನಗಳನ್ನು ನಿಯಂತ್ರಿಸಲು ಕಷ್ಟ ಸಾಧ್ಯವಾಗಿದೆ. ಕಟಪಾಡಿಯಿಂದ ಶಿರ್ವ ಕಡೆಗೆ, ಕಾಪುವಿನಿಂದ ಉಡುಪಿ ಕಡೆಗೆ, ಅದೇ ರೀತಿ ಉಡುಪಿಯಿಂದ ಕಾಪು ಕಡೆಗೆ ಸಂಚಾರ ಮಾಡುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಜಂಕ್ಷನ್ನಲ್ಲಿ ಪಾದಾಚಾರಿಗಳು ಕೂಡಾ ರಸ್ತೆ ದಾಟಲು ಸಮಸ್ಯೆ ಉಂಟಾಗುತ್ತದೆ. ಕಟಪಾಡಿ ಹೊರ ಠಾಣಾ ಪೊಲೀಸ್ ಸಿಬ್ಬಂದಿ ಜನರನ್ನು ಹಾಗೂ ವಾಹನಗಳನ್ನು ನಿಯಂತ್ರಿಸದಿದ್ದಲ್ಲಿ ಈ ಪ್ರದೇಶದಲ್ಲಿ ರಸ್ತೆ ಅಪಘಾತ ಆಗುವ ಸಂಭವ ಇವೆ.