ಕೊಲಂಬೊ: ಶ್ರೀಲಂಕಾದಲ್ಲಿ ಎಲ್ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರ 64ನೇ ಹುಟ್ಟುಹಬ್ಬವನ್ನು ಸಾರ್ವಜನಿಕ ವಾಗಿ ಆಚರಿಸಲು ಯೋಜನೆ ರೂಪಿಸಿದ್ದ ಮಾಜಿ ಕೌನ್ಸಿಲರ್ ಸೇರಿದಂತೆ 7 ಮಂದಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದು ಅವರಿಂದ ಕೇಕ್ ಹಾಗೂ ಬ್ಯಾನರ್ಗಳನ್ನು ವಶಪಡಿಸಿ
ಕೊಂಡಿದ್ದಾರೆ. ತಮಿಳರಿಗಾಗಿ ಪ್ರತ್ಯೇಕ ದೇಶದ ಸ್ಥಾಪನೆಗೆ ಆಗ್ರಹಿಸಿ, ಮೂರು ದಶಕಗಳ ಕಾಲ ಎಲ್ಟಿಟಿಇ ಸಂಘಟನೆ ಮೂಲಕ ಹೋರಾಟ ನಡೆಸಿದ ಪ್ರಭಾಕರನ್ ಅವರನ್ನು 2009ರಲ್ಲಿ ಶ್ರೀಲಂಕಾ ಸೇನೆ ಹತ್ಯೆ ಮಾಡಿತ್ತು.