ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನವಿರಾಮ: 'ಗುಟೆರಸ್‌ ಮನವಿ ಜಾಗತಿಕ' 

Last Updated 2 ಮೇ 2020, 18:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೆರಸ್‌ ಅವರು ಕದನವಿರಾಮ ಪಾಲಿಸುವಂತೆ ಮಾಡಿರುವ ಮನವಿ ಜಾಗತಿಕವಾಗಿ ಅನ್ವಯವಾಗುತ್ತದೆ. ಗಡಿ ನಿಯಂತ್ರಣ ರೇಖೆ ಸೇರಿದಂತೆ ಎಲ್ಲೆಡೆ ಇದನ್ನು ಪಾಲಿಸಬೇಕು’ ಎಂದು ಅವರ ವಕ್ತಾರ ಸ್ಟಿಫಾನ್‌ ಡುಜಾರಿಕ್ ತಿಳಿಸಿದ್ದಾರೆ.

ಕೋವಿಡ್-‌19 ಪಿಡುಗಿನ ಈ ವೇಳೆಯಲ್ಲಿ ಜಾಗತಿಕ ಕದನವಿರಾಮಕ್ಕೆ ಗುಟೆರಸ್‌ ಅವರು ಕರೆ ನೀಡಿದರೂ ಪಾಕಿಸ್ತಾನ, ಭಾರತದ ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ ಕುರಿತ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಪಾಕಿಸ್ತಾನದ ಸೇನೆ ಪೂಂಛ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಭಾರತೀಯ ಪ್ರಜೆಯನ್ನು ಹತ್ಯೆ ಮಾಡಿತ್ತು. ಭಾರತ ಇದನ್ನು ವಿರೋಧಿಸಿ ಶುಕ್ರವಾರ ಪಾಕಿಸ್ತಾನದ ಬಳಿ ಖಂಡನೆ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT