ವಿಶ್ವಸಂಸ್ಥೆ: ‘ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೆರಸ್ ಅವರು ಕದನವಿರಾಮ ಪಾಲಿಸುವಂತೆ ಮಾಡಿರುವ ಮನವಿ ಜಾಗತಿಕವಾಗಿ ಅನ್ವಯವಾಗುತ್ತದೆ. ಗಡಿ ನಿಯಂತ್ರಣ ರೇಖೆ ಸೇರಿದಂತೆ ಎಲ್ಲೆಡೆ ಇದನ್ನು ಪಾಲಿಸಬೇಕು’ ಎಂದು ಅವರ ವಕ್ತಾರ ಸ್ಟಿಫಾನ್ ಡುಜಾರಿಕ್ ತಿಳಿಸಿದ್ದಾರೆ.
ಕೋವಿಡ್-19 ಪಿಡುಗಿನ ಈ ವೇಳೆಯಲ್ಲಿ ಜಾಗತಿಕ ಕದನವಿರಾಮಕ್ಕೆ ಗುಟೆರಸ್ ಅವರು ಕರೆ ನೀಡಿದರೂ ಪಾಕಿಸ್ತಾನ, ಭಾರತದ ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ ಕುರಿತ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ಪಾಕಿಸ್ತಾನದ ಸೇನೆ ಪೂಂಛ್ನ ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಭಾರತೀಯ ಪ್ರಜೆಯನ್ನು ಹತ್ಯೆ ಮಾಡಿತ್ತು. ಭಾರತ ಇದನ್ನು ವಿರೋಧಿಸಿ ಶುಕ್ರವಾರ ಪಾಕಿಸ್ತಾನದ ಬಳಿ ಖಂಡನೆ ವ್ಯಕ್ತಪಡಿಸಿತ್ತು.