ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜು ಮಾತನಾಡಿ, ‘ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಕಲ್ಪಿಸಲು ಇಂತಹ ಪ್ರಯತ್ನ ಮಾಡಿದೆ. ಕ್ಷೀರಪಥ, ಗ್ರಹಣ ವೈವಿಧ್ಯ, ಸ್ಯಾಟಲೈಟ್ ಮೊದಲಾದ ವಿಷಯಗಳನ್ನು ಸರಳ ಕಲಿಕೆಯ ಭಾಗವಾಗಿ ದೃಶ್ಯ ಮತ್ತು ಶ್ರವ್ಯದ ಮೂಲಕ ತಲುಪಿಸುತ್ತದೆ. ವೀಕ್ಷಣೆಯ ಸ್ಥಳದಲ್ಲಿಯೇ ನಿರ್ಮಿಸಿರುವ ಟೆಂಟ್ನಲ್ಲಿ 30 ವಿದ್ಯಾರ್ಥಿಗಳು ಕುಳಿತು ವೀಕ್ಷಿಸಬಹುದು. 180 ಡಿಗ್ರಿ ತನಕ ವಾಲುವ ಫಿಶ್–ಐ ಕ್ಯಾಮೆರಾ ಇದಕ್ಕಾಗಿ ಬಳಕೆಯಾಗಿದೆ’ ಎಂದರು. ವರ್ಣಾಸ್ ಟೆಕ್ನಾಲಜಿಯ ಚರಣ್ತಯ್ಯಾ ಭೂಸನೂರುಮಠ, ಮುಖ್ಯ ಶಿಕ್ಷಕ ಶಿವಶಂಕರ್ ಹಾಗೂ ಮಕ್ಕಳು ಹಾಜರಿದ್ದರು.