ಮುಲ್ತಾನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಕಾರಿಡಾರ್ ಯೋಜನೆಯು ರಸ್ತೆ, ರೈಲು ಜಾಲ ಸೇರಿದಂತೆ ವಿವಿಧೋದ್ದೇಶದ ಯೋಜನೆಯಾಗಿದೆ. ಇದು ದೇಶದ ಆರ್ಥಿಕತೆಗೆ ಚೇತರಿಕೆ ನೀಡಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ದೇಶದ ಸಾಲದ ಹೊರೆಯನ್ನು ಹೆಚ್ಚಿಸಲು ಕಾರಿಡಾರ್ ಯೋಜನೆ ಕಾರಣವಲ್ಲ ಎಂದಿದ್ದಾರೆ.