ಸುರಪುರ(ಯಾದಗಿರಿ ಜಿಲ್ಲೆ): ಶಾಸಕ, ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಈ ಬಾರಿ ಚುನಾವಣೆಯಲ್ಲಿಯೂ ಮತದಾನ ಮಾಡಲು ಸಾಧ್ಯವಾಗಲಿಲ್ಲ.
ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಲು ಬೆಳಿಗ್ಗೆಯೇ ನಾರಾಯಣಪುರಕ್ಕೆ ತೆರಳಿದ್ದರು. ಸಂಜೆ 6 ಗಂಟೆಯೊಳಗೆ ನಗರಕ್ಕೆ ವಾಪಸು ಬರಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿಯೂ ತಮ್ಮ ಹಕ್ಕು ಚಲಾಯಿಸುವುದರಿಂದ ವಂಚಿತರಾದರು.
ಕಳೆದ ವಿಧಾನಸಭೆ ಚುನಾವಣೆಯಲ್ಲೂ ಇದೇ ರೀತಿ ಮತದಾನದಿಂದ ವಂಚಿತರಾಗಿದ್ದರು.