ಹೊಳೆಹೊನ್ನೂರು: ಭದ್ರಾವತಿ ತಾಲ್ಲೂಕಿನ ಮೈದೊಳಲು ಗ್ರಾಮದಲ್ಲಿ ಕಾಲರಾ ಕಾಣಿಸಿಕೊಂಡು ಜನ ಸಾವನ್ನಪ್ಪುತ್ತಿರುವ ಬೆನ್ನಲ್ಲೇ ಪಕ್ಕದ ಮಂಗೋಟೆಯಲ್ಲೂ ವಾಂತಿ–ಭೇದಿಯಿಂದ ಆರು ಜನ ಅಸ್ವಸ್ಥರಾಗಿದ್ದಾರೆ.
ಮಂಗೋಟೆಯ ಕೆಲ ಜನರಲ್ಲೂ ಕಾಲರಾ ಲಕ್ಷಣ ಕಾಣಿಸಿಕೊಂಡಿರುವುದರಿಂದ ಆರೋಗ್ಯಾಧಿಕಾರಿಗಳ ತಂಡ ಭಾನುವಾರ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿತು. ರೋಗಪೀಡಿತರ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿತು.
ಶಾರದಮ್ಮ, ಪ್ರೇಮಾ, ಅಶ್ವಿನಿ, ಅನಿಲ್, ಅವಿನಾಶ್ ಎರಡು ದಿನಗಳಿಂದ ವಾಂತಿ–ಭೇದಿಯಿಂದ ಅಸ್ವಸ್ಥರಾಗಿದ್ದು, ಮೈದೊಳಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.