ರಾಜಕೀಯ ಮುಖಂಡರು, ಕಾವಿಧಾರಿಗಳು, ಅಧಿಕಾರಿಗಳು, ಕವಿಗಳು ಸಾಹಿತಿಗಳು, ಕಲಾಕಾರರು, ನಾಟಕಕಾರರು, ಶಿಲ್ಪಿಗಳು, ಮಾಧ್ಯಮದವರು, ಕ್ರೀಡಾಪಟುಗಳು, ಢೋಂಗಿ ಬಾಬಾಗಳು, ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಯವರು... ಇಂಥವರ ಪ್ರಭಾವಕ್ಕೆ ಒಳಗಾಗಿ ರೂಪಿಸಲಾಗುವ ನೀತಿ, ಕಾನೂನುಗಳೆಲ್ಲವೂ ಶ್ರೀಮಂತ, ಅತಿ ಶ್ರೀಮಂತರ ಪರವಾಗಿಯೇ ಇರುತ್ತವೆ. ಇವು ಜನರಿಗೆ ವರವಲ್ಲ, ಶಾಪ.