ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಕೋಲಾ ಬದಿಯಿಂದ ಬರುವಾಗ ಇಲ್ಲಿ ಮುನ್ಸೂಚನೆಯೇ ಇಲ್ಲದೇ ತಿರುವು ತೆಗೆದುಕೊಳ್ಳಬೇಕು. ಆದರೆ, ವೇಗವಾಗಿ ಬರುವ ವಾಹನಗಳ ಚಾಲಕರು ಇದು ಅರಿವಿಗೆ ಬಾರದೇ ಎದುರಿಗಿರುವ ಪೆಟ್ರೋಲ್ ಬಂಕ್ಗೆ ಹೋಗುವ ನೇರ ರಸ್ತೆಗೆ ವಾಹವನ್ನು ನುಗ್ಗಿಸುತ್ತಾರೆ. ಕೊನೆಗೆ ವಾಹನಗಳ ಮೇಲೆ ನಿಯಂತ್ರಣ ಸಿಗದೇ ನಾಲೆಗೆ ಬೀಳುವಂತಾಗಿದೆ. ಒಂದುವೇಳೆ ಇಲ್ಲಿ ದ್ವಿಚಕ್ರ ವಾಹನಗಳ ಅಪಘಾತವಾದರೆ ಹೆಚ್ಚಿನ ಪ್ರಮಾಣದ ಅಪಾಯವಾಗುವ ಆತಂಕವಿದೆ. ಇದನ್ನು ತಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಮುಂದಾಗಬೇಕಿದೆ ಎನ್ನುತ್ತಾರೆ ಸ್ಥಳೀಯರಾದ ಮಂಜುನಾಥ.