‘ಭಾರತವು ಸಹೋದರ ದೇಶವಾಗಿದ್ದು, ಹಿತಾಸಕ್ತಿಗೆ ಭಂಗ ತರುವುದಿಲ್ಲ. ಅದರ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಸ್ಪಂದಿಸಲಿದೆ. ಎರಡು ಪ್ರಬಲ ದೇಶಗಳ ನಡುವೆ ನಾವು ಇರಬಯಸುವುದಿಲ್ಲ. ನಮ್ಮದು ಸಣ್ಣ ರಾಷ್ಟ್ರ. ಪ್ರಬಲ ಶಕ್ತಿಗಳ ನಡುವೆ ಸಮತೋಲಿತ ಸಂಬಂಧಗಳನ್ನು ಹೊಂದದೇ ಹೋದರೆ ದೇಶದ ಹಿತಾಸಕ್ತಿಗೆ ಮಾರಕವಾಗುತ್ತದೆ’ ಎಂದು ‘ಭಾರತ್ ಶಕ್ತಿ’ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.