ಎಲ್ಲಾ ನಿರ್ಣಯಗಳನ್ನೂ ಜಾರಿಗೆ ತರುವಲ್ಲಿ ಭಾರತ ನಿರತವಾಗಿದ್ದು, ಮುಂದಿನ ಸಭೆಯೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಜೈಶಂಕರ್ ಇದೇ ವೇಳೆ ತಿಳಿಸಿದರು. ಸಚಿವರ ಮಟ್ಟದ ಸಭೆಯಲ್ಲಿ ಭಾಗವಹಿಸುವ ಮೂಲಕ, ಕಾಮನ್ವೆಲ್ತ್ ಒಕ್ಕೂಟಕ್ಕೆ ಭಾರತ ನೀಡುವ ಪ್ರಾಮುಖ್ಯತೆಯನ್ನು ಪುನಃ ದೃಢಪಡಿಸಲಾಗಿದೆ ಎಂದು ಸಹ ಹೇಳಿದರು.