‘ನಾಯಕತ್ವ ಹಂತದಲ್ಲಿ ಕಾರ್ಯಯೋಜನೆಗಳನ್ನು ರೂಪಿಸಲು ಇಬ್ಬರೂ ನಾಯಕರು ಒಪ್ಪಿದ್ದಾರೆ. ತಂತ್ರಜ್ಞಾನ, ತಯಾರಿಕಾ ವಲಯ, ಇಂಧನ ಹಾಗೂ ಆಹಾರ ಭದ್ರತೆ ಸೇರಿದಂತೆ ವಿವಿಧ ವಲಯಗಳಲ್ಲಿ ಹೂಡಿಕೆ ಕೈಗೊಳ್ಳಲು ಯೋಜನೆ ರೂಪಿಸುವ ಕುರಿತು ಚರ್ಚಿಸಿದರು’ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದರು.
‘ಮುಖ್ಯವಾಗಿ ಭಾರತದಲ್ಲಿ ಸ್ಥಿರವಾದ ಇಂಧನ ಬೆಲೆಯನ್ನು ನಿಗದಿಪಡಿಸುವಲ್ಲಿ ಸೌದಿ ಅರೇಬಿಯಾ ಯಾವ ರೀತಿ ಕ್ರಮಕೈಗೊಳ್ಳಬಹುದು ಎನ್ನುವ ಬಗ್ಗೆ ನರೇಂದ್ರ ಮೋದಿ ಚರ್ಚಿಸಿದರು’ ಎಂದು ಗೋಖಲೆ ತಿಳಿಸಿದರು.