ಇಸ್ಲಾಮಾಬಾದ್: ‘ಭಾರತ ಯಾವುದೇ ಮುನ್ಸೂಚನೆ ನೀಡದೆ ಸಟ್ಲೇಜ್ ನದಿಗೆ 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದೆ. ಇದರಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದ ರೀತಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ’ ಎಂದು ಪಾಕಿಸ್ತಾನ ಸೋಮವಾರ ಹೇಳಿದೆ.
‘ಭಾರತದ ಪಂಜಾಬ್ ಭಾಗದಲ್ಲಿ ರುವ ಸಟ್ಲೇಜ್ ನದಿಯ ನೀರು ಯಾವುದೇ ಸಮಯದಲ್ಲಾದರೂ ಪಾಕಿ ಸ್ತಾನದ ಭಾಗವನ್ನು ಪ್ರವೇಶಿಸಬಹುದು’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ಡಿಎಂಎ) ವಕ್ತಾರ ಬ್ರಿಗೇಡಿಯರ್ ಮುಖ್ತರ್ ಅಹ್ಮದ್ ತಿಳಿಸಿದ್ದಾರೆ.
ಸಟ್ಲೇಜ್ ನದಿ ತೀರದಲ್ಲಿರುವ ಕಸೂರ್ ಹಾಗೂ ಇತರೆ ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಭಾಕ್ರಾ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಬೇಕಾಯಿತು ಎಂದು ಭಾರತದ ಜಲಂಧರ್ನ ಉಪ ಆಯುಕ್ತರು ತಿಳಿಸಿದ್ದಾರೆ.