‘ಅಪರಾಧ ತಡೆ ಮತ್ತು ಕ್ರಿಮಿನಲ್ ಜಸ್ಟೀಸ್’ ವಿಷಯದ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಪೌಲಮಿ ತ್ರಿಪಾಠಿ, ‘ಸುಸ್ಥಿರ ಅಭಿವೃದ್ಧಿ, ಶಾಂತಿ ಮತ್ತು ಭದ್ರತೆಗೆ ರಾಷ್ಟ್ರದ ಗಡಿಗಳಾಚೆಯೂ ಸಕ್ರಿಯವಾಗಿರುವ ಅಪರಾಧಿ ಜಾಲಗಳು ಧಕ್ಕೆ ತರುತ್ತಿವೆ. ಉಗ್ರ ಸಂಘಟನೆಗಳಿಗೆ ಈ ಜಾಲವು ಮಾದಕ ವಸ್ತು ಸರಬರಾಜು, ಹಣ ಅಕ್ರಮ ವರ್ಗಾವಣೆ, ಶಸ್ತ್ರಾಸ್ತ್ರಗಳ ಆಮದು, ಗಡಿಗಳಲ್ಲಿ ಉಗ್ರರ ನುಸುಳುವಿಕೆಗೆ ಸಹಾಯ ಮಾಡುತ್ತಿವೆ’ ಎಂದು ಹೇಳಿದರು.