ಅರಿಜಿತ್ ತಪ್ಪಿಸಿಕೊಂಡು ಓಡಾಡುತ್ತಿರುವ ವಿಷಯವನ್ನು ವಿರೋಧ ಪಕ್ಷಗಳು ವಿಧಾನಸಭೆಯ ಒಳಗೆ ಮತ್ತು ಹೊರಗೆ ಪ್ರಸ್ತಾಪಿಸಿದ್ದು, ಆಡಳಿತಾರೂಢ ಜೆಡಿಯು ಮುಜುಗರ ಅನುಭವಿಸುತ್ತಿದೆ. ಹೀಗಾಗಿಯೇ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಮಂಗಳವಾರ ‘ಅರಿಜಿತ್ ಶರಣಾಗದಿದ್ದರೆ ಜೆಡಿಯು–ಬಿಜೆಪಿ ಬಾಂಧವ್ಯ ಹಾಳಾಗಬಹುದು’ ಎಂದು ಎಚ್ಚರಿಸಿದ್ದಾರೆ.