ಕಾಲೇಜು ಶಿಕ್ಷಣ ಇಲಾಖೆಯು 2017ರಲ್ಲಿ ಹಿರಿತನದ ಆಧಾರದ ಮೇಲೆ ಪ್ರಾಂಶುಪಾಲರನ್ನು ನೇಮಕ ಮಾಡಲು ಸಂದರ್ಶನವನ್ನು ನಿಗದಿ ಮಾಡಿತ್ತು. ಆದರೆ ಆನಂತರ ಯಾವುದೇ ಕಾರಣ ನೀಡದೆ ಸಂದರ್ಶನವನ್ನು ರದ್ದುಪಡಿಸಿತ್ತು. ಹೊಸ ಸರ್ಕಾರವಾದರೂ ಇತ್ತ ಗಮನ ಹರಿಸಿ, ಕಾಲೇಜುಗಳಿಗೆ ಯುಜಿಸಿ ನಿಯಮಾನುಸಾರ ಕಾಯಂ ಪ್ರಾಂಶುಪಾಲರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು.