‘ಭಯೋತ್ಪಾದನೆ, ಪ್ರತ್ಯೇಕತಾವಾದ, ತೀವ್ರವಾದಗಳನ್ನು ತೊಡೆದುಹಾಕುವುದು. ಆ ಮೂಲಕ ವಾಣಿಜ್ಯ, ಕಾನೂನು, ಆರೋಗ್ಯ, ಕೃಷಿ, ಪ್ರಾದೇಶಿಕ ಸಂಪರ್ಕ, ಪರಿಸರ ಸಂರಕ್ಷಣೆ–ವಿಕೋಪ ನಿರ್ವಹಣೆ ಹಾಗೂ ಸದಸ್ಯ ರಾಷ್ಟ್ರಗಳ ಜನರ ಮಧ್ಯೆ ಸಂಬಂಧವನ್ನು ವೃದ್ಧಿಸುವ ಕಾರ್ಯಸೂಚಿಯನ್ನು ಎಸ್ಸಿಒ ಹೊಂದಿದೆ’ ಎಂದು ಪ್ರಧಾನಿ ಮೋದಿ ಭಾರತದಿಂದ ಇಲ್ಲಿಗೆ ಪ್ರಯಾಣ ಆರಂಭಿಸುವ ಮುನ್ನ ಹೇಳಿದ್ದರು.