ಜನಸಾಮಾನ್ಯರು ಮತ್ತು ಸರ್ಕಾರದ ನಡುವೆ ಕೊಂಡಿಯಂತಿರುವ ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿರುವುದು ಆತಂಕ ತರುವ ವಿಚಾರ.
ಪ್ರಜಾಪ್ರಭುತ್ವದ ಒಳಿತು ಹಾಗೂ ರಕ್ಷಣೆಗಾಗಿ ಮಾಧ್ಯಮಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು ಅಗತ್ಯ. ಈ ಕಾರಣಕ್ಕೆ ಪತ್ರಕರ್ತರ ರಕ್ಷಣೆಗಾಗಿ ಮತ್ತು ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವುದಕ್ಕಾಗಿ ಸರ್ಕಾರ ಶೀಘ್ರವೇ ಕಠಿಣ ಕಾನೂನು ಜಾರಿಗೆ ತರಬೇಕು. -ಹೊನ್ನಪ್ಪ ಶಾಖಾಪೂರ, ಸಿರವಾರ