2018ರ ಅಕ್ಟೋಬರ್ 26 ರಂದು ಮಹಿಂದಾ ಅವರನ್ನು ಪ್ರಧಾನಿಯನ್ನಾಗಿ ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ನೇಮಿಸಿದ್ದರು. ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ ಈ ನೇಮಕ ಮಾಡಿದ್ದರು. ಇದರಿಂದ, ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ, ಅದೇ ವರ್ಷದ ಡಿಸೆಂಬರ್ನಲ್ಲಿ ಮಹಿಂದಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಮಹಿಂದಾ ಅವರು ತಮ್ಮ 24ನೇ ವಯಸ್ಸಿನಲ್ಲಿಯೇ ಸಂಸತ್ಗೆ 1970ರಲ್ಲಿ ಆಯ್ಕೆಯಾಗಿದ್ದರು.