ಈ ಎಲ್ಲಾ ಆರೋಪ ಮತ್ತು ಆಗ್ರಹಗಳಿಗೆ ತಕ್ಕ ಪ್ರತ್ಯುತ್ತರ ನೀಡಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಆಗಿರುವ ಸಂದೀಪ್ ಕುಮಾರ್ ಬಯ್ಯಪು ಅವರು, ‘ಭಾರತದ ಬಗ್ಗೆ ಆಧಾರರಹಿತ ಮತ್ತು ಮೋಸಗಾರಿಕೆ’ಯ ನಿರೂಪಣೆ ಮಾಡಲು ಮತ್ತೊಮ್ಮೆ ಪಾಕಿಸ್ತಾನ ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿಕೊಂಡಿದೆ. ಈ ಹಿಂದೆ ನಡೆಸಿದ ಯಾವ ಪ್ರಯತ್ನಗಳೂ ಫಲಪ್ರದವಾಗಿಲ್ಲ ಈಗಲೂ ಅವು ಯಶಸ್ಸು ನೀಡುವುದಿಲ್ಲ’ ಎಂದು ಹೇಳಿದ್ದಾರೆ.