ಕೊಟ್ಟೂರು: ಇಲ್ಲಿನ ತೇರು ಬಯಲು ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗುರುವಾರ ಮತದಾರರ ಜಾಗೃತಿಗಾಗಿ ಇವಿಎಂ, ವಿವಿಪ್ಯಾಟ್ ಯಂತ್ರಗಳ ಪ್ರಾತ್ಯಕ್ಷಿಕೆ ನೀಡಲಾಯಿತು.
ಮತದಾರರಿಗೆ ಇವಿಎಂ ಯಂತ್ರದಲ್ಲಿ ಮತ ಚಲಾಯಿಸುವ ಬಗೆ, ಬ್ಯಾಲ್ಟ ಚೀಟಿ ಕಾಣದಿದ್ದರೆ ಮತ್ತು ಬೀಪ್ ಜೋರಾಗಿ ಕೇಳಿಸದಿದ್ದರೆ ಏನು ಮಾಡಬೇಕು ಎಂಬುದರ ತಿಳಿವಳಿಕೆ ನೀಡಲಾಯಿತು.
ಮತದಾರ ಆಯ್ಕೆ ಮಾಡಿಕೊಂಡ ಅಭ್ಯರ್ಥಿಯ ಹೆಸರು ಇರುವುದನ್ನು ಖಾತ್ರೆ ಮಾಡಿಕೊಳ್ಳಬೇಕು. ಬ್ಯಾಲೆಟ್ ಯೂನಿಟ್ ಮತ ಯಂತ್ರದಲ್ಲಿ ಇರುವ ನೀಲಿ ಗುಂಡಿಯನ್ನು ಒತ್ತ ಬೇಕು. ನಂತರ ಮತಯಂತ್ರದಲ್ಲಿ ಕಾಣಿಸಿಕೊಳ್ಳುವ ದೀಪವನ್ನು ನೋಡಿಕೊಳ್ಳಬೇಕು ಎಂದು ತಿಳಿಸಲಾಯಿತು.
ಮತ ಚಲಾಯಿಸಿದ ಮಾಹಿತಿಯನ್ನು 7 ಸೆಕೆಂಡ್ ವರೆಗೆ ವಿವಿಪ್ಯಾಟ್ನಲ್ಲಿ ಗಮನಿಸ ಬಹುದಾಗಿದೆ ಎಂದು ಸಿಬ್ಬಂದಿ ವಿವರಿಸಿದರು.
ಮುಖಂಡರಾದ ವಿಠಲರಾಜ್, ಸಿದ್ದಪ್ಪ, ನರಸಿಂಹಸ್ವಾಮಿ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕಿ ಅನುಷ, ಶೀಲವಂತರ ಕೊಟ್ರೇಶ್, ಎಸ್.ಕೊಟ್ರಪ್ಪ ಇದ್ದರು.