ಕುಂದಾಪುರ: ‘ಕೆಲವೊಂದು ನಿರ್ದಿಷ್ಟ ಕಾರಣಗಳಿಂದ ಸಂಯುಕ್ತ ಜನತಾದಳ ಕೇಂದ್ರದ ಎನ್ಡಿಎ ಸರ್ಕಾರಕ್ಕೆ ಬೆಂಬಲ ನೀಡಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಅವರಂತೆ ಭ್ರಷ್ಟಾಚಾರದ ಆರೋಪ ಗಳನ್ನು ಹೊತ್ತಿರುವ ಇಲ್ಲಿನ ಕೆಲವು ಬಿಜೆಪಿಯ ನಾಯಕರು ಜೈಲಿಗೆ ಹೋಗಿ, ಬರುವುದು ಮಾಮೂಲಿ ಯಾಗಿದೆ’ ಎಂದು ರಾಷ್ಟ್ರೀಯ ಜೆಡಿಯು ಪ್ರಧಾನ ಕಾರ್ಯದರ್ಶಿ ತನ್ವೀರ್ ಅಖ್ತರ್ ಲೇವಡಿ ಮಾಡಿದರು.