ಚಿಕಾಗೊದಲ್ಲಿ ವಿಶ್ವ ಹಿಂದೂ ಸಮಾವೇಶ: ಭಾಗವತ್ಗೆ ಆಹ್ವಾನ

ವಾಷಿಂಗ್ಟನ್: ಅಮೆರಿಕದ ಚಿಕಾಗೊದಲ್ಲಿ ಸೆ. 7ರಿಂದ 9ರವರೆಗೆ ವಿಶ್ವ ಹಿಂದೂ ಸಮಾವೇಶ ನಡೆಯಲಿದ್ದು, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
‘ಸಾಮೂಹಿಕವಾಗಿ ಚಿಂತಿಸಿ, ಧೈರ್ಯವಾಗಿ ಸಾಧಿಸಿ’ ಘೋಷವಾಕ್ಯ ಕುರಿತು ಭಾಗವತ್ ಮಾತನಾಡಲಿದ್ದಾರೆ. ವಿಶ್ವದಾದ್ಯಂತ ಇರುವ ಹಿಂದೂ ಸಮುದಾಯವನ್ನು ಒಗ್ಗೂಡಿಸುವ ಹಾಗೂ ಮನುಕುಲದ ಒಳಿತಿಗಾಗಿ ಶ್ರಮಿಸುವಂತೆ ಕರೆ ನೀಡಲು ಭಾಗವತ್ ಈ ವೇದಿಕೆಯನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ ಎಂದು ಸಮಾವೇಶದ ಸಂಘಟಕ ಸ್ವಾಮಿ ವಿಜ್ಞಾನಾನಂದ ಹೇಳಿದ್ದಾರೆ.
‘ಇದು ಧಾರ್ಮಿಕ ಸಮಾವೇಶವಲ್ಲ. ಹಿಂದೂ ಸಮುದಾಯವನ್ನು ಒಗ್ಗೂಡಿಸುವುದು ಮತ್ತು ಸಬಲಗೊಳಿಸುವುದು ಅಲ್ಲದೆ, ಜಗತ್ತಿನ ಇತರೆ ಹಿಂದುಳಿದ ಸಮುದಾಯಕ್ಕೆ ಸಹಕಾರ ನೀಡುವ ಉದ್ದೇಶವಿದೆ’ ಎಂದು ಅವರು ತಿಳಿಸಿದ್ದಾರೆ.
ಆರ್ಥಿಕತೆ, ಶಿಕ್ಷಣ, ಮಾಧ್ಯಮ, ಸಂಘಟನೆ, ರಾಜಕೀಯ ಮತ್ತು ಮಹಿಳೆ ಹಾಗೂ ಯುವಸಮೂಹದ ಕುರಿತು ವಿವಿಧ ಗೋಷ್ಠಿಗಳು ನಡೆಯಲಿವೆ.
ದಲೈಲಾಮಾ, ಶ್ರೀಶ್ರೀ ರವಿಶಂಕರ್, ದತ್ತಾತ್ರೇಯ ಹೊಸಬಾಳೆ, ಎಸ್.ಪಿ. ಕೊಠಾರಿ, ಮೋಹನದಾಸ್ ಪೈ, ಅನುಪಮ್ ಖೇರ್, ರಾಜು ರೆಡ್ಡಿ, ಸ್ವಾಮಿ ಪರಮಾತ್ಮಾನಂದ ಸರಸ್ವತಿ, ಚಂದ್ರಿಕಾ ಟಂಡನ್, ಪ್ರೊ. ಸುಭಾಷ್, ಮುಖೇಶ್ ಅಘಿ, ಅರವಿಂದ್ ಪನಗಾರಿಯಾ, ದಿಲೀಪ್ ಸುಂದರಂ, ಡೇನಿಯಲ್ ಬ್ರ್ಯಾಂಟ್, ರಾಜೇಶ್ ಸುಂದರಂ, ವಿವೇಕ್ ಅಗ್ನಿಹೋತ್ರಿ, ಕವಿತಾ ಕೃಷ್ಣಮೂರ್ತಿ, ಡಾ. ಎಲ್. ಸುಬ್ರಮಣಿಯಂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.
***
2,500: ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಪ್ರತಿನಿಧಿಗಳು
250: ಪ್ರಮುಖ ಭಾಷಣಕಾರರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.