ಬಿಜೆಪಿಯಿಂದ ಕೆ.ಎಂ.ಶ್ರೀನಿವಾಸ್, ನಾರಾಯಣಪ್ಪ, ಎಂ.ವೇಣುಗೋಪಾಲ್, ಕೆ.ಸಿ.ಮುನಿಯಪ್ಪ, ನವೀನ್ ಕುಮಾರ್, ಗೋವಿಂದ್, ಬಿ.ದೇವಾನಂದ್ ಆಂಕಾಂಕ್ಷಿಗಳಾಗಿದ್ದು, ಇವರು ಯಾವುದೇ ಕಾರ್ಯಕ್ರಮ ನಡೆಸಬೇಕಾದರೆ ತಾಲ್ಲೂಕು ಸಮಿತಿ ಯಿಂದ ಅನುಮತಿ ಪಡೆಯಬೇಕು ಎಂದರು.ನಾಯಕರ ಆದೇಶವನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಆಕಾಂಕ್ಷಿಗಳು ಪ್ರತ್ಯೇಕವಾಗಿ ಪ್ರಚಾರ ಮಾಡುವುದಾಗಲೀ ಅಥವಾ ನಾನೇ ಅಭ್ಯರ್ಥಿಯೆಂದು ಹೇಳುವುದಾಗಲೀ ಮಾಡಬಾರದು ಎಂದು ಸಲಹೆ ನೀಡಿದರು.