ಶ್ರೀನಗರ: ಪಾಕಿಸ್ತಾನದ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುರುವಾರ ರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಯೋಧ ಪರಮ್ವೀರ್ ಸಿಂಗ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಜಮ್ಮು–ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಪೀರ್ ಬಾಬಾ ಚೌಕಿ ಪ್ರದೇಶದ ಮೇಲೆ ದಾಳಿ ಮಾಡಿದ ಪಾಕಿಸ್ತಾನದ ಸೈನಿಕರಿಗೆ ಗುಂಡಿನಿಂದಲೇ ಮಾರುತ್ತರ ನೀಡಲಾಗಿದೆ. ಗುಂಡಿನ ಕಾಳಗ ಸ್ವಲ್ಪ ಹೊತ್ತು ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಂದ್: ಭದ್ರತಾ ಪಡೆಗಳಿಂದ ಈಚೆಗೆ ನಾಲ್ವರು ನಾಗರಿಕರು ಮತ್ತು ಇಬ್ಬರು ಉಗ್ರರ ಹತ್ಯೆ ಖಂಡಿಸಿ ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸತತ ಐದನೇ ದಿನ ಶುಕ್ರವಾರ ಬಂದ್ ಆಚರಿಸಲಾಯಿತು.