ಸಿಂಗಪುರ: ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಇಲ್ಲಿನ ಮರೀನಾ ಕೊಲ್ಲಿಯಲ್ಲಿ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದಕ್ಕಾಗಿ 32 ವರ್ಷದ ಭಾರತೀಯ ಪ್ರಜೆಯನ್ನು ಸಿಂಗಪುರದ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.
ಪ್ರತಿಭಟನೆ ನಡೆಸಿದ ಚಿತ್ರವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ. ಸಿಂಗಪುರದಲ್ಲಿ ಪೊಲೀಸರ ಅನುಮತಿಯಿಲ್ಲದೆ ಸಾರ್ವಜನಿಕ ಸಭೆ ಆಯೋಜಿಸುವುದು ಅಪರಾಧ. ಅಲ್ಲದೆ, ವಿದೇಶಗಳ ರಾಜಕೀಯ ಕಾರಣಗಳಿಗಾಗಿ ಸಭೆ ನಡೆಸುವುದಕ್ಕೆ ಇಲ್ಲಿನ ಪೊಲೀಸರು ಅನುಮತಿ ನೀಡುವುದಿಲ್ಲ.