ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಮಕೃಷ್ಣ ಹೆಗಡೆ ಅವರು ರಾಜಕೀಯ ಗುರು ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ, ರಾಜಕೀಯಕ್ಕೆ ಕರೆತಂದಿದ್ದು ಮತ್ತು ರಾಜಕಾರಣಿಯಾಗಿ ಬೆಳೆಸಿದ್ದು ಯಾರು ಎಂಬುದನ್ನು ಅವರು ಮರೆತಿದ್ದಾರೆ. ಈಗ ಹೆಗಡೆ ಹೆಸರು ಹೇಳಿರುವ ಅವರು ಇನ್ನು ಕೆಲ ದಿನ ಕಳೆದರೆ ರಾಹುಲ್ ಹೆಸರು ಹೇಳುತ್ತಾರೆ. ಹೀಗಾಗಿ, ಸಿದ್ದರಾಮಯ್ಯ ಮಾತಿಗೆ ಮಹತ್ವ ಕೊಡಬೇಕಾದ ಅಗತ್ಯವಿಲ್ಲ’ ಎಂದರು.