ಬೆಂಗಳೂರು: ಮಡಿವಾಳ ಬಸ್ ನಿಲ್ದಾಣದಲ್ಲಿ ಎಂ.ವಿಜಯರಾಜ್ ಎಂಬುವರ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು, ಎರಡು ಚಿನ್ನದ ಸರಗಳನ್ನು ಕಳವು ಮಾಡಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿಯಾಗಿರುವ ವಿಜಯರಾಜ್, ‘ನನ್ನನ್ನು ಹಿಂಬಾಲಿಸಿಕೊಂಡು ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಖಾರದ ಪುಡಿ ಎರಚಿ ₹2 ಲಕ್ಷ ಮೌಲ್ಯದ ಸರಗಳನ್ನು ಕಿತ್ತುಕೊಂಡು ಪರಾರಿಯಾದರು’ ಎಂದು ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ.
‘ಮೇ 8ರಂದು ಕುಟುಂಬ ಸಮೇತ ಹೊರನಾಡಿಗೆ ಹೋಗಿದ್ದೆ. ಮೇ 11ರಂದು ನಸುಕಿನಲ್ಲಿ ನಗರಕ್ಕೆ ವಾಪಸ್ ಬಂದು ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಇಳಿದುಕೊಂಡಿದ್ದೆ. ಅಲ್ಲಿಂದ ನಡೆದುಕೊಂಡು ಹೋಗುತ್ತಿದ್ದಾಗ ಕೃತ್ಯ ನಡೆದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.