‘ಭಯೋತ್ಪಾದನೆಯನ್ನು ನಿಗ್ರಹಿಸುವುದು, ಗಡಿಯಾಚೆಗಿನ ಒಳನುಸುಳುವಿಕೆಯನ್ನು ತಡೆಯುವ ಕುರಿತು ಪಾಕಿಸ್ತಾನ ಗಂಭೀರ ಪ್ರಯತ್ನ ಮಾಡಬೇಕು. ಇದರ ಹೊರತಾಗಿಯೂ ಪಾಕ್, ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕರ ವಿರುದ್ಧ ಕ್ರಮಗಳನ್ನು ಕೈಗೊಂಡಿದ್ದು, ಉಗ್ರ ಹಫೀಜ್ ಸಯೀದ್ ಬಂಧನದಲ್ಲಿದ್ದಾನೆ. ಅಂತೆಯೇ, ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆ, ಭಯೋತ್ಪಾದಕರಾದ ಮಸೂದ್ ಅಜರ್ ಅವರಂಥವರ ವಿರುದ್ಧವೂ ಪಾಕ್ ಕ್ರಮ ಕೈಗೊಳ್ಳಬೇಕು. ಇವರು ಪಾಕ್ ನೆಲದಲ್ಲಿದ್ದುಕೊಂಡೇ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸುವಷ್ಟು ಸಮರ್ಥರಾಗಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.