ಭಯೋತ್ಪಾದನೆಯನ್ನು ನಿಗ್ರಹಿಸಲು ಪಾಕಿಸ್ತಾನದ ನಾಯಕರೊಡನೆ ಮಾತುಕತೆ ನಡೆಸುವುದು ಮುಖ್ಯವಾಗಿದೆ. ಭಯೋತ್ಪಾದನೆಗೆ ಬೆಂಬಲ ನೀಡದಂತೆ ಪಾಕ್ನ ಉನ್ನತ ಮಟ್ಟದ ನಾಯಕರಿಗೆ ನೇರವಾಗಿ ತಿಳಿಸುವುದು ಈ ಮಾತುಕತೆಯಿಂದ ಸಾಧ್ಯವಾಗಿದೆ. ಅಷ್ಟೇ ಅಲ್ಲ, ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಧ್ಯವಿರುವ ಕ್ರಮಗಳನ್ನುಎರಡೂ ಕಡೆಯವರು ಕಂಡುಕೊಳ್ಳುವುದು ಅತ್ಯಗತ್ಯವಾಗಿದೆಎಂದು ಹಸ್ಸನ್ ಅಭಿಪ್ರಾಯಪಟ್ಟರು.