ಲಡಾಖ್ನ ಗಾಲ್ವನ್ ಕಣಿವೆಯ ಬಳಿ ಸೋಮವಾರ ರಾತ್ರಿ ನಡೆದಿದ್ದ ಭಾರತ–ಚೀನಾ ಸೇನಾಪಡೆಗಳ ನಡುವಣ ಸಂಘರ್ಷದಲ್ಲಿ ಸೇನಾಧಿಕಾರಿ ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲೂ ಸಾವು–ನೋವು ಸಂಭವಿಸಿದ್ದವು. ಬಳಿಕ ಚೀನಾ ಗಾಲ್ವನ್ ಕಣಿವೆಯ ಸಾರ್ವಭೌಮತೆಯನ್ನು ಪ್ರತಿಪಾದಿಸಿತ್ತು. ಆದರೆ, ಚೀನಾ ಮಾಡಿರುವ ಪ್ರತಿಪಾದನೆಯನ್ನು ಭಾರತ ಪ್ರಬಲವಾಗಿ ತಳ್ಳಿಹಾಕಿದೆ.