ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ನೀಡಿದ್ದ ಎಚ್ಚರಿಕೆ ತಿಳಿದಿರಲಿಲ್ಲ: ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ

Last Updated 1 ಆಗಸ್ಟ್ 2019, 2:17 IST
ಅಕ್ಷರ ಗಾತ್ರ

ಕೊಲಂಬೊ: ‘ಈಸ್ಟರ್ ಭಾನುವಾರದಂದು ಬಾಂಬ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಭಾರತೀಯ ಗುಪ್ತಚರ ಇಲಾಖೆ ನೀಡಿದ್ದ ಎಚ್ಚರಿಕೆ ಕುರಿತು ನನಗೆ ಮಾಹಿತಿ ಇರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ನನಗೆ ಈ ವಿಷಯ ತಿಳಿಸಿದ್ದರೆ, ದಾಳಿ ಸಂಭವಿಸುವುದನ್ನು ತಡೆಯಬಹುದಾಗಿತ್ತು’ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ.

ಏ.21ರಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಇದಕ್ಕೂ 17 ದಿನ ಮೊದಲು, ಭಾರತ ಈ ದಾಳಿ ಸಂಭವದ ಬಗ್ಗೆ ಶ್ರೀಲಂಕಾಗೆ ಸ್ಪಷ್ಟ ಎಚ್ಚರಿಕೆ ನೀಡಿತ್ತು.

‘ಏ.16ರಂದು ನಾನು ವಿದೇಶ ಪ್ರವಾಸಕ್ಕೆ ಹೊರಟೆ. ಅಲ್ಲಿಯವರೆಗೂ ನನಗೆ ಈ ಕುರಿತು ಯಾವುದೇ ಮಾಹಿತಿ ತಿಳಿದಿರಲಿಲ್ಲ. ಆದರೆ ರಕ್ಷಣಾ ಕಾರ್ಯದರ್ಶಿ ಹಾಗೂ ಆಗಿನ ಪೊಲೀಸ್ ಮಹಾನಿರ್ದೇಶಕರ ನಡುವೆ ಈ ವಿಷಯ ಚರ್ಚೆಯಾಗುತ್ತಿತ್ತಂತೆ. ಕೆಲವು ಸರ್ಕಾರಿ ಅಧಿಕಾರಿಗಳ ಮಿತಿಯಿಂದಾಗಿ ದಾಳಿ ತಡೆಯಲು ಆಗಲಿಲ್ಲ’ ಎಂದು ಸಿರಿಸೇನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT