ಕಳೆದ ಜನವರಿ 25ರಂದು ಬುಲ್ಡೋಜರ್ ಮೂಲಕ ಬಂಗ್ಲೆಯನ್ನು ನೆಲಸಮ ಮಾಡುವ ಕಾರ್ಯವನ್ನು ಅಧಿಕಾರಿಗಳು ಕೈಗೆತ್ತಿಕೊಂಡಿದ್ದರು. ಆರ್ಸಿಸಿಯಿಂದ ನಿರ್ಮಿಸಿದ್ದ ಕಾರಣ, ಸುಲಭವಾಗಿ ಕೆಡವಲು ಸಾಧ್ಯವಾಗಿರಲಿಲ್ಲ. ಇದಾದ ಬಳಿಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತಾಂತ್ರಿಕ ವಿವಿಯ ತಜ್ಞರ ತಂಡವು ಸ್ಥಳ ಪರಿಶೀಲನೆ ನಡೆಸಿ, ಸ್ಫೋಟಕ ಬಳಸಿ ಕಟ್ಟಡ ಉರುಳಿಸುವಂತೆ ಸಲಹೆ ನೀಡಿತ್ತು.